ಕ್ರೈಂತಾಲ್ಲೂಕುಶಿವಮೊಗ್ಗಶಿವಮೊಗ್ಗ ಜಿಲ್ಲೆಸಾಗರಹೊಸನಗರ

ಹಿಲ್ಕುಂಜಿ ತಿರುವಿನಲ್ಲಿ ಕಾರು ಬಸ್ಸು ಅಪಘಾತ: ನಜ್ಜುಗುಜ್ಜಾದ ಕಾರು | ಸಾಗರ ನಂದಿತಳೆಯ ಮೂವರಿಗೆ ಗಾಯ

ಹಿಲ್ಕುಂಜಿ ತಿರುವಿನಲ್ಲಿ ಕಾರು ಬಸ್ಸು ಅಪಘಾತ: ನಜ್ಜುಗುಜ್ಜಾದ ಕಾರು | ಸಾಗರ ನಂದಿತಳೆಯ ಮೂವರಿಗೆ ಗಾಯ

ಹೊಸನಗರ: ತಾಲೂಕಿನ ಹಿಲ್ಕುಂಜಿ ತಿರುವಿನ ಬಳಿ ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಶಿವಮೊಗ್ಗದಿಂದ ಉಡುಪಿ‌ ಕಡೆ ಹೋಗುತ್ತಿದ್ದ ಖಾಸಗಿ ಬಸ್ಸು, ಮಾರಣಕಟ್ಟೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಕಾರು ಸಂಪೂರ್ಣ ಜಖಂಗೊಂಡಿದೆ ಡಿಕ್ಕಿಯ ಹೊಡೆತಕ್ಕೆ ಕಾರು ಧರೆಯಿಂದ ಕೆಳಗೆ ಬೀಳುವ ಹಂತದಲ್ಲಿತ್ತು ಆದರೆ ಮರದಿಂದಾಗಿ ಕಾರು ಅಲ್ಲೇ ಸ್ಟ್ರಕ್ ಆಗಿತ್ತು.

ಕಾರಿನಲ್ಲಿದ್ದ ಸಾಗರ ತಾಲೂಕಿನ ನಂದಿತಳೆ ನಿವಾಸಿಗಳಾದ ಮುರುಳಿ, ಶಶಿ ಮತ್ತು ನಾಗರಾಜ ಎಂಬುವವರು ಗಾಯಗೊಂಡಿದ್ದರು.

ಬಸ್ಸಿನಲ್ಲಿ‌ ನಗರ ಠಾಣೆ ಎಎಸ್ಐ ಕುಮಾರ್ ಇದ್ದು, ಕೂಡಲೇ ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದ ಗಾಯಾಳುಗಳನ್ನು ಕೆಳಗಿಳಿಸಿ ಅಂಬುಲೆನ್ಸ್ ಮೂಲಕ ಹೊಸನಗರ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *