ಪ್ರಮುಖ ಸುದ್ದಿತಾಲ್ಲೂಕುತೀರ್ಥಹಳ್ಳಿರಾಜ್ಯಶಿವಮೊಗ್ಗಶಿವಮೊಗ್ಗ ಜಿಲ್ಲೆ

ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ಜಾತ್ರೆ | ಸೆ.17 ರಂದು ಕಂಕಣ ಕಟ್ಟುವ ಮೂಲಕ‌ ಉತ್ಸವಕ್ಕೆ ಚಾಲನೆ

ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ಜಾತ್ರೆ : ಸೆ.17 ರಿಂದ ದೇವಿಗೆ ಕಂಕಣ ಕಟ್ಟುವ ಮೂಲಕ ಚಾಲನೆ

ಹೊಸನಗರ: ಸೆ.20 ರಿಂದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರೆ ನಡೆಯಲಿದ್ದು ಸೆ.17 ರಂದು ದೇವಿಗೆ ಕಂಕಣ ಕಟ್ಟುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಬಿ.ಸ್ವಾಮಿರಾವ್ ಹೇಳಿದರು.

ಅಮ್ಮನಘಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸೆ.20, 24, 27 ಮತ್ತು ಅಕ್ಟೋಬರ್ 1 ರಂದು ಜಾತ್ರೆ ನಡೆಯಲಿದೆ. ನಂತರ ನವರಾತ್ರಿ 10 ದಿನ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ನಡೆಯಲಿದೆ ಎಂದರು.

ಅಮ್ಮನಘಟ್ಟ ಸನ್ನಿಧಿಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದ್ದು ಈ ಸಂಬಂಧ ಸಿಎಂ, ಡಿಸಿಎಂ ಜೊತೆ ಮಾತನಾಡಿದ್ದು, ಹಣ ನೀಡುವ ಭರವಸೆ ನೀಡಿದ್ದಾರೆ ಎಂದರು.

ಹಿಂದಿನ ಸಮಿತಿ ಕಡೆ ರೂ.16 ಲಕ್ಷ: ಅಭಿವೃದ್ಧಿಗೆ ನೀಡದಿದ್ದರೆ ಧರಣಿ ಎಚ್ಚರಿಕೆ:
ದೇಗುಲದ ಕಳೆದ ಅವಧಿಯ ಸಮಿತಿಯವರ ಹತ್ತಿರ ರೂ.16 ಲಕ್ಷ ಇದೆ. ಈವರೆಗೆ ಅದನ್ನು ನಮಗೆ ನೀಡಿಲ್ಲ. ಅಭಿವೃದ್ಧಿಗೆ ಹಣ ನೀಡದಿದ್ದಲ್ಲಿ ಧರಣಿ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಆಹ್ವಾನಿಸಿದ್ದೆವು. ಆದರೆ ಯಾವ ಕಾರಣದಿಂದ ಬರಲಿಲ್ಲವೋ ಗೊತ್ತಿಲ್ಲ‌ ದೇವಸ್ಥಾನ ಅವರ ವ್ಯಾಪ್ತಿಗೆ ಬರಲಿದ್ದು ಅಭಿವೃದ್ಧಿಗೆ ಶಾಸಕರ ಸಹಕಾರ ಮುಖ್ಯ ಎಂದರು.
ನನ್ನ ಅಧಿಕಾರದ ಅವಧಿಯಲ್ಲಿ ದೇವಸ್ಥಾನ ದ ನೂತನ ಶಿಲಾಮಯ ಕಟ್ಟಡ ನಿರ್ಮಾಣ ಮಾಡುವ ಆಶಯವಿದೆ ಎಂದರು.
ದೇವಸ್ಥಾನ ಸಮಿತಿ ಸದಸ್ಯರಾದ ಕೊಡೂರು ವಿಜೇಂದ್ರರಾವ್, ಸುಧೀರ್, ಪುಟ್ಟಪ್ಪ, ಭಾಸ್ಕರ್ ಜೋಯ್ಸ್ ಇದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *