
ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|
ಶಿವಮೊಗ್ಗ: ಅನಿಮಿಷ ಚಿತ್ರಶಾಲೆ’ ಸಹಯೋಗದೊಂದಿಗೆ ‘ಪರಿ ಮೂವಿ ಮೇಕರ್ಸ’ಮೂಲಕ ನಿರ್ಮಾಣಗೊಂಡ ‘ಹಕ್ಕಿಗಾಗಿ’ ಸಿನಿಮಾವು.ಈ ಬಾರಿಯ ೧೭ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ
ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು NETPC JURRY AWARD ಪಡೆದುಕೊಂಡಿದೆ. ಗಾರ್ಗಿ ಕಾರೇಹಕ್ಲುರವರು ಚಿತ್ರಕಥೆ & ನಿರ್ದೇಶನ ಮಾಡಿದ್ದಾರೆ.
ನಿರ್ಮಾಪಕರಾಗಿ ಹರೀಶ್ ಹೆಚ್ ಎಸ್ ಮತ್ತು ಗಾರ್ಗಿ ಕಾರೇಹಕ್ಲು. ಸಂಗೀತ ಯದು ನಂದನ್.ಛಾಯಾಗ್ರಹಣ ಪ್ರದೀಪ್ ಆರ್ಯನ್ ಸಂಕಲನ ಸ್ಯಾಮ್ ಸನ್ ಜೆ ಸೈಮನ್. ಕಾರ್ಯಕಾರಿಣಿ ನಿರ್ಮಾಪಕರು ಧನುಷ್ ಕುಮಾರ್.
ಈ ಸಿನಿಮಾದ ಒಂದು ಮುಖ್ಯ ಪಾತ್ರದಲ್ಲಿ ಪರಿಸರ ವಿಜ್ಞಾನಿ ‘ನಾಗೇಶ್ ಹೆಗಡೆ’ಯವರು ಮೊದಲ ಬಾರಿಗೆ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಹಕ್ಕಿಗಾಗಿ’ಸಿನಿಮಾವು ಸಂಪೂರ್ಣ ಸಾರ ಸಂಸ್ಥೆ ಮತ್ತು ಸಾಗರ ಹೊಸನಗರದ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದ್ದಲ್ಲದೆ, ಕಲಾವಿದರು ತಂತ್ರಜ್ಞರು ಹಾಡುಗಾರರು ಬಹುತೇಕ ಎಲ್ಲರೂ ಶಿವಮೊಗ್ಗ ಜಿಲ್ಲೆಯವರೇ ಆಗಿರುವುದು ವಿಶೇಷ.
ಇದರಲ್ಲಿ ಮುಖ್ಯ ಪಾತ್ರದಲ್ಲಿ ನಾಗರಾಜ ನೀಲ್(ಅಭಿನಯ &ಹಾಡಿನ ಸಾಹಿತ್ಯ) ಸಿಂಧೂ, ವೈದ್ಯನಾಥ, ಸೌಜನ್ಯ, ರೇಣುಕಪ್ಪ ಶಿವಮೊಗ್ಗ, ಸುದಿಂದ್ರರಾವ್, ಡಾ||ನಾಗನಾಥ, ಡಾ||ನಾಗೇಶ್, ಚೇತನ್ ರಾಯನಳ್ಳಿ, ಶ್ರಿದೇವಿ ಮೂಲೆಮನಿ,ರೂಪ ಕೆ ಹೆಚ್,
ಸಾಗರ ಹೊಸನಗರದ ಕಲಾವಿದರು ತಂತ್ರಜ್ಞರ ಗಮಲು
ನಿರ್ದೇಶಕರಾದ ಗಾರ್ಗಿ ಕಾರೇಹಕ್ಲು, ಪ್ರಮುಖ ಪಾತ್ರವರ್ಗದಲ್ಲಿ ಸಾನ್ವಿ (ಅಭಿನಯ ಮತ್ತು ಹಾಡಿದ್ದಾರೆ) , ಪದ್ಮಶ್ರೀ ಹಾರೆಕೊಪ್ಪ(ಅಭಿನಯ & ಹಾಡಿನ ಸಾಹಿತ್ಯ) ಮಂಜುನಾಥ್ ಬ್ಯಾಣದ್, ಗಣಪತಿ ಹೆಗಡೆ, ಕುಮಾರ್ ಹೆಚ್ ಜಿ , ಮಕ್ಕಳಾದ ಚಿನ್ಮಯಿ ಎಮ್ ಬ್ಯಾಣದ್, ಶ್ರೀರಾಮ್ ಸೂರ್ಯ,ಅವನೀಶ್, ಸಮೃದ್ಧ, ಸಮರ್ಥ ಮುಖ್ಯ ಪಾತ್ರವರ್ಗದಲ್ಲಿದ್ದಾರೆ.
ಗೌರವ ಪಾತ್ರಗಳಲ್ಲಿ ಕೆ ಬಿ ಲಿಂಗಪ್ಪ ಗೌಡ್ರು, ಶರತ್ ಕೆ ಎಲ್, ಪೂಜಾ ಕೆ ಎಲ್, ವಿಜೇಂದ್ರ, ಕೇಶವ, ಶಿವಕುಮಾರ್ ಡಿ ಎಸ್.
ತಂತ್ರಜ್ಞರಾಗಿ…
‘ಮೇಘರಾಜ್’ ಧ್ವನಿ ಗ್ರಹಣ, ಕಾರ್ಯಕಾರಿಣಿ ನಿರ್ಮಾಪಕರು ‘ಧನುಷ್ ಕುಮಾರ್’, ರೇಖಾಚಿತ್ರ ಮೋಹಿತ್, ತಾಂತ್ರಿಕ ಸಹಾಯ ‘ಅಪೂರ್ವ ಮೃತ್ಯುಂಜಯ’












