
ಕೆನರಾಬ್ಯಾಂಕಿನಿಂದ ಚಿಕ್ಕಪೇಟೆ ಪ್ರೌಢಶಾಲೆಗೆ ರೂ.1.35 ಲಕ್ಷ ಪೀಠೋಪಕರಣ ಮತ್ತು ಯುಪಿಎಸ್ ಕೊಡುಗೆ
ಹೊಸನಗರ: ಗ್ರಾಮೀಣ ಮಕ್ಕಳ ಉತ್ತಮ ವ್ಯಾಸಂಗಕ್ಕಾಗಿ ಕೆನರಾ ನಿರಂತರ ಕೊಡುಗೆ ನೀಡುತ್ತಾ ಬಂದಿದೆ ಎಂದು ಕೆನರಾ ಬ್ಯಾಂಕ್ ಶಿವಮೊಗ್ಗ ವಿಭಾಗದ ಎಜಿಎಂ ಎಂ.ಕೆ.ರಾಠೋಡ್ ಹೇಳಿದರು.
ತಾಲೂಕಿನ ಚಿಕ್ಕಪೇಟೆ ನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೆನರಾ ಬ್ಯಾಂಕ್ ಸಿಎಸ್ಆರ್ ಚಟುವಟಿಕೆಯಡಿ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆಗೆ ರೀ.1.35 ಲಕ್ಷ ವೆಚ್ಚದ ಪೀಠೋಪಕರಣ ಮತ್ತು ಯುಪಿಎಸ್ ನೀಡಲಾಗಿದೆ ಇದನ್ನು ಸಧ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಶಾಲಾಭಿವೃದ್ಧಿ ಸಮಿತಿವತಿಯಿಂದ ಎಂ.ಕೆ.ರಾಠೋಡ್ರಿಗೆ ಸನ್ಮಾನಿಸಿ ಕೊಡುಗೆ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಹಲಸಿನಳ್ಳಿ, ಉಪಾಧ್ಯಕ್ಷೆ ಅಶ್ವಿನಿ ರಮೇಶ್, ಕೆನರಾಬ್ಯಾಂಕ್ ಶಾಖಾ ಪ್ರಬಂಧಕ ನಿತಿನ್ ಎಂ.ಜಿ, ಸುನಿಲ್, ಮುಖ್ಯಶಿಕ್ಷಕ ಡಾ.ಜಿ.ಸುಧಾಕರ್, ಕರುಣಾಕರ ಶೆಟ್ಟಿ, ಸುಮನಾ ಭಾಸ್ಕರ್ ಹಲವರು ಉಪಸ್ಥಿತರಿದ್ದರು.











