ತಾಲ್ಲೂಕುಪ್ರಮುಖ ಸುದ್ದಿಹೊಸನಗರ

ಕಾಲುವೆಗೆ ಬಿದ್ದು ಕಾಡಮ್ಮೆ ಸಾವು : ಹೊಸ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ

  • ಕಾಲುವೆಗೆ ಬಿದ್ದು ಕಾಡಮ್ಮೆ ಸಾವು : ಹೊಸ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ

ಹೊಸನಗರ: ಕಾಡೆಮ್ಮೆಯೊಂದು ಕಂದಕವೊಂದರಲ್ಲಿ ಬಿದ್ದು ಸಾವನಪ್ಪಿದ ಘಟನೆ ತಾಲೂಕಿನ ಬ್ರಾಹ್ಮಣವಾಡ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಬ್ರಾಹ್ಮಣವಾಡ ಗ್ರಾಮದ ಸನಂ 50/52 ರ ನಾಗರಾಜಭಟ್ಟರಿಗೆ ಸೇರಿದ ಜಮೀನಿನ ಕಾಲುವೆಯೊಂದರಲ್ಲಿ ಸಾವನಪ್ಪಿದ ಸ್ಥಿತಿಯಲ್ಲಿ ಕಾಡೆಮ್ಮೆ ಪತ್ತೆಯಾಗಿತ್ತು.

ಅರಣ್ಯಾಧಿಕಾರಿಗಳು ಪರಿಶೀಲಿಸಿದ ಬಳಿಕ ಪಶು ವೈದ್ಯಾಧಿಕಾರಿ ಅವಿನಾಶ್ ಮರಣೋತ್ತರ ಪರೀಕ್ಷೆ ನಡೆಸಿದ್ದು ಕಾಡೆಮ್ಮೆ ವಯೋಸಹಜ ಸಾವನಪ್ಪಿದ ಬಗ್ಗೆ ದೃಢಪಡಿಸಿದ್ದಾರೆ.

ನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ‌ನಡೆದಿದ್ದು ಇತ್ತೀಚಿನ ನಿಯಮಾವಳಿ‌ ಪ್ರಕಾರ ಕಾಡೆಮ್ಮೆ ಕೋಡುಗಳನ್ನು ಭಾಗಶಃ ನಾಶಪಡಿಸಿ ನಂತರ ಅಂತ್ಯಕ್ರಿಯೆ ನಡೆಸಲಾಯಿತು.

ಹೊಸನಗರ ಎಸಿಎಫ್ ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ಸಂಜಯ್, ಉಪ‌ವಲಯ ಅರಣ್ಯಾಧಿಕಾರಿ ಅಮೃತ್ ಸುಂಕದ್, ಗ್ರಾಪಂ ಸದಸ್ಯ ರಾಜಶೇಖರ್ ಕುಂದಗಲ್, ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *