ಹೊಸನಗರಸಾಗರಸೊರಬ

ಹೊಸನಗರದಲ್ಲಿ ಸಂಭ್ರಮದ ಭೂಮಿ‌ಹುಣ್ಣಿಮೆ

  • ಹೊಸನಗರದಲ್ಲಿ ಸಂಭ್ರಮದ ಭೂಮಿ‌ಹುಣ್ಣಿಮೆ

ಹೊಸನಗರ: ತಾಲೂಕಿನಾಧ್ಯಂತ ಭೂಮಿ‌ಹುಣ್ಣಿಮೆ ಆಚರಣೆಯನ್ನು ಸಂಪ್ರದಾಯದಂತೆ ಆಚರಿಸಲಾಯಿತು.

ಪಟ್ಟಣ ಸೇರಿದಂತೆ ವಾರಂಬಳ್ಳಿ, ಕೋಡೂರು, ಸೊನಲೆ, ಗೇರುಪುರ, ನಗರ, ನಿಟ್ಟೂರು, ಮಾಸ್ತಿಕಟ್ಟೆ, ಯಡೂರು, ಕರಿನಗೊಳ್ಳಿ, ಮಾರುತಿಪುರ ಸೇರಿದಂತೆ ವಿವಿಧ ಭಾಗದಲ್ಲಿ ಇಂದು ಬೆಳಿಗ್ಗೆ ಭೂಮಿ‌ಹುಣ್ಣಿಮೆ ವಿಶೇಷ ಪೂಜೆ ನೆರವೇರಿಸಿದರು.

ಕರಿನಗೊಳ್ಳಿ ರೈತ ರಾಜಕುಮಾರ್ ಕುಟುಂಬ ಸಮೇತ ಭೂಮಿ‌ಪೂಜೆ ನೆರವೇರಿಸಿದರು.

ರಾತ್ರಿಯಿಂದಲೇ ತಯಾರಿ ನಡೆಸಿದ್ದ ರೈತರು ನಸುಕಿನಜಾವ ತಮ್ಮ ಜಮೀನುಗಳಿಗೆ ತೆರಳಿ, ಬೆಳೆದುನಿಂತ ಬೆಳೆಗೆ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅಡಿಕೆ ತೋಟಗಳಿಗೂ ಪೂಜೆ ಮಾಡಲಾಯಿತು.

ಭೂಮಿತಾಯಿಗೆ ಕಡುಬು ಸೇರಿದಂತೆ ವಿವಿಧ ತಿನಿಸುಗಳನ್ನು ಅರ್ಪಿಸಿ ನಂತರ ಅಲ್ಲೇ ಕುಟುಂಬ ಸಮೇತ ಪ್ರಸಾದ ಸ್ವೀಕರಿಸಿ ವಾಪಾಸಾದರು. ಕೆಲವು ಭಾಗದಲ್ಲಿ ಗದ್ದೆಗಳಲ್ಲೇ ಮಂಟಪ ಮಾಡಿ, ತಳಿರು ತೋರಣದಿಂದ ವಿಶೇಷ ಅಲಂಕಾರ ಮಾಡಲಾಗಿತ್ಕ

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *