ಕ್ರೈಂತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಶಿವಮೊಗ್ಗಶಿವಮೊಗ್ಗ ಜಿಲ್ಲೆ

ಹೊಸನಗರದಲ್ಲಿ ನಕಲಿ ಹಕ್ಕುಪತ್ರ ಜಾಲ? ತಹಶೀಲ್ದಾರ್ ದಿಢೀರ್ ದಾಳಿ | ನೂರಾರು ನಕಲಿ ಹಕ್ಕುಪತ್ರ ವಶಕ್ಕೆ | 

ಹೊಸನಗರದಲ್ಲಿ ನಕಲಿ ಹಕ್ಕುಪತ್ರ ಜಾಲ? ತಹಶೀಲ್ದಾರ್ ದಿಢೀರ್ ದಾಳಿ | ನೂರಾರು ನಕಲಿ ಹಕ್ಕುಪತ್ರ ವಶಕ್ಕೆ |

ಹೊಸನಗರ : ತಹಶೀಲ್ದಾರ್ ರಶ್ಮಿ ಹಾಲೇಶ ದಿಢೀರ್ ದಾಳಿ ನಡೆಸಿ, ನಕಲಿ ಹಕ್ಕುಪತ್ರಗಳು, ಅರಣ್ಯ ಎನ್ಒಸಿ, ಅದಕ್ಕೆ ಬಳಸಿದ ಸೀಲ್ ಗಳು ಸೇರಿದಂತೆ ನಕಲಿ ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ಎಲ್ ಗುಡ್ಡೇಕೊಪ್ಪದಲ್ಲಿ ಸೋಮವಾರ ನಡೆದಿದೆ.

ಅನೇಕ ದಿನಗಳಿಂದ ತಮಗೆ ಬರುತ್ತಿದ್ದ ಮಾಹಿತಿ ಆಧರಿಸಿ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಎಲ್.ಗುಡ್ಡೇಕೊಪ್ಪ ನಿವಾಸಿ ರಾಜೇಂದ್ರ ಎಂಬಾತನ ಮನೆಯ ಮೇಲೆ ದಾಳಿ‌ ನಡೆಸಿದ್ದಾರೆ. ಆ ವೇಳೆ ನೂರಾರು ನಕಲಿ ಹಕ್ಕುಪತ್ರಗಳು, ಅದಕ್ಕೆ ಬೇಕಾದ ಅರಣ್ಯ ಇಲಾಖೆ ಎನ್ಒಸಿ, ತಾಲೂಕು ‌ಕಚೇರಿ, ಪಂಚಾಯ್ತಿ, ಸೊಸೈಟಿ ವಿವಿಧ ಬ್ಯಾಂಕ್ ಗಳ‌ ನಕಲಿ ಸೀಲ್ ಗಳು ಕಂಡು ಬಂದಿದ್ದು ವಶಕ್ಕೆ ಪಡೆಯಲಾಗಿದೆ.
ದಾಳಿ ಮಾಡಿ ನೂರಾರು ಹಕ್ಕುಪತ್ರ, ಖಾಲಿ ಪತ್ರಗಳು, ಅದಕ್ಕೆ ಸಂಬಂಧಿಸಿದ ಅನೇಕ ನಕಲಿ‌ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ನಕಲಿ‌ ಹಕ್ಕುಪತ್ರದ ಜಾಲ ಕಾರ್ಯನಿರ್ವಹಿಸುತ್ತಿದೆಯೇ.. ಎಷ್ಟು ವರ್ಷದಿಂದ ಈ ಅಕ್ರಮ ನಡೆಯುತ್ತಿದೆ. ತಾಲೂಕಿನಲ್ಲಿ ಈವರೆಗೆ ಹಂಚಿಕೆಯಾಗಿರುವ ನಕಲಿ ಹಕ್ಕುಪತ್ರಗಳ ಮಾಹಿತಿ ಇನ್ನಷ್ಟೆ ಕಲೆಹಾಕಬೇಕಿದೆ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದ್ದಾರೆ.
ದಾಳಿಯಲ್ಲಿ ಶಿರೆಸ್ತಾದಾರ ಮಂಜುನಾಥ, ಪಿಎಸ್ಐ ಶಂಕರಗೌಡ ಪಾಟಿಲ್, ಚಿರಾಗ್, ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *