ಹೊಸನಗರತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿರಾಜ್ಯಸಾಗರ

ಇಲ್ಲಿ ಪೌರಕಾರ್ಮಿಕರೇ ಸಭಾಧ್ಯಕ್ಷರು..ಅತಿಥಿಗಳು | ಜನಪ್ರತಿನಿಧಿ, ಅಧಿಕಾರಿಗಳೇ ಸಭಿಕರು | ರಾಜ್ಯಕ್ಕೇ ಮಾದರಿಯಾದ ಪೌರಕಾರ್ಮಿಕರ ದಿನಾಚರಣೆ

ಹೊಸನಗರ: ಪಟ್ಟಣ ಪಂಚಾಯ್ತಿಯಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ವಿಶೇಷವಾಗಿ ಮೂಡಿ ಬಂದಿದ್ದು  ರಾಜ್ಯದಲ್ಲೇ ಮಾದರಿಯಾಗಿದೆ. ಇಡೀ ವೇದಿಕೆ  ಪೌರ ಕಾರ್ಮಿಕರಿಗೆ ಮೀಸಲಾಗಿದ್ದರೆ.. ಜನಪ್ರತಿನಿಧಿಗಳು, ಅಧಿಕಾರಿಗಳು ಸಭಿಕರಾಗಿ ಕುಳಿತು ಇಡೀ ಕಾರ್ಯಕ್ರಮದ ಮಹತ್ವವನ್ನು ಜಗತ್ತಿಗೆ ಸಾರಿದರು.

ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಾಗಪ್ಪ, ಸರಸ್ವತಿ, ಚಂದ್ರಪ್ಪ, ನಾಗರಾಜ, ನಾಗರತ್ನ, ಗೀತಾ, ಬಾಬು, ಕಾರ್ತಿಕ್, ಅಣ್ಣಪ್ಪ, ಕಿರಣ, ರಮೇಶ, ಇಸ್ಮಾಯಿಲ್, ಗಿರೀಶ್, ಸುನಿಲ್, ಉದಯ, ಸಾಧು, ಯಶೋಧಮ್ಮ, ಆನಂದ ಸೇರಿದಂತೆ, 20 ಕ್ಕು ಹೆಚ್ಚು ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮುಖ್ಯಾಧಿಕಾರಿ ಟಿ.ಬಾಲಚಂದ್ರಪ್ಪ, ಒಬ್ಬ ರೋಗಿಗೆ ವೈದ್ಯ ಎಷ್ಟು ಮುಖ್ಯವೋ ಅದಕ್ಕು ಮಿಗಿಲಾಗಿ ಪಟ್ಟಣದ ನಾಗರಿಕರಿಗೆ ಪೌರಕಾರ್ಮಿಕ ಮುಖ್ಯ. ಅವರ ಸೇವಾಗೌರವ, ವ್ಯಕ್ತಿಗೌರವಕ್ಕೆ ಮನ್ನಣೆ ನೀಡಬೇಕಾಗಿದೆ ಎಂದರು.

ತಹಶೀಲ್ದಾರ್ ವಿ.ಎಸ್.ರಾಜೀವ್ ಪೌರಕಾರ್ಮಿಕರ ದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಪಟ್ಟಣಪಂಚಾಯ್ತಿ ಗಮನಸೆಳೆದಿದೆ. ಇದು ಪೌರಕಾರ್ಮಿಕರಿಗೆ ಸಂದ ಗೌರವ ಎಂದರು.

ಹಿರಿಯ ಪೌರಕಾರ್ಮಿಕ ನಾಗಪ್ಪ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಇದಕ್ಕು ಮುನ್ನ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಜಾಥಾ ನಡೆಸಲಾಯಿತು. ಪ್ರಮುಖ ವೃತ್ತಗಳಲ್ಲಿ ಹೂ ಚೆಲ್ಲಿ ಸಿಹಿಹಂಚುವ ಮೂಲಕ ಶುಭಕೋರಲಾಯಿತು.

ಪಪಂ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಸದಸ್ಯರಾದ ಹಾಲಗದ್ದೆ ಉಮೇಶ್, ಎಂ.ಎನ್.ಸುಧಾಕರ್, ಶ್ರೀಪತಿರಾವ್, ನಾಗಪ್ಪ ರೆಡ್ಡಿ, ಅಶ್ವಿನಿಕುಮಾರ್, ಗುರುರಾಜ್ ಬಜಾಜ್, ಚಂದ್ರಕಲಾ, ಯಾಸೀರ್, ಪಟ್ಟಣ ಪಂಚಾಯಿತಿ ಅಧಿಕಾರಿವರ್ಗ ಸಭಿಕರ ಆಸನದಲ್ಲಿ ಆಸೀನರಾಗಿದ್ದು ವಿಶೇಷವಾಗಿತ್ತು..

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *