ಪ್ರಮುಖ ಸುದ್ದಿHomeತೀರ್ಥಹಳ್ಳಿಶಿಕಾರಿಪುರಶಿರಾಳಕೊಪ್ಪಶಿವಮೊಗ್ಗ

MP BYR| ಜನಸಂಪರ್ಕ, ಸ್ಪಂದನೆಗಾಗಿ ಸಂಸದರ ವ್ಯಾಟ್ಸಪ್ ಚಾನೆಲ್ ಬಿಡುಗಡೆ | MP BYR | ಸಂಸದರಿಂದ ಉತ್ತಮ ಕೆಲಸ | ಕಿಮ್ಮನೆ ಜಯರಾಂ

  • ಸಂಸದ ಬಿ.ವೈ.ರಾಘವೇಂದ್ರ ಅವರ ಅಧಿಕೃತ ವ್ಯಾಟ್ಸಪ್ ಚಾನೆಲ್ ಲೋಕಾರ್ಪಣೆ

  • ಸಾಮಾಜಿಕ ಜಾಲತಾಣದ ಮೂಲಕ ಜನಸಂಪರ್ಕ ಮತ್ತು ಸ್ಪಂದನೆಗೆ ಅನುಕೂಲ | ಸಂಸದ ಬಿ.ವೈ.ರಾಘವೇಂದ್ರ

  • ಸಂಸದರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ | ಕಿಮ್ಮನೆ ಜಯರಾಂ

 

ಶಿವಮೊಗ್ಗ|shimoga| ಸಂಸದ ಬಿ.ವೈ ರಾಘವೇಂದ್ರ ಅವರ ಅಧಿಕೃತ ವಾಟ್ಸಪ್ ಚಾನೆಲ್ ನ್ನ ಲೋಕಾರ್ಪಣೆ ಮಾಡಲಾಯಿತು. ನಗರದ ರಾಯಲ್ ಆರ್ಕಿಡ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಾಟ್ಸಪ್ ಚಾನೆಲ್ ಗೆ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ಸಂಸದರು, ಡಿಜಿಟಲ್ ವಿಶ್ವವಿದ್ಯಾಲಯ, ಡಿಜಿಟಲೀಕರಣದ ಸಾಮಾಜಿಕ ಮಾಧ್ಯಮಗಳಲ್ಲಿ ಜನ ಸಂಪರ್ಕ ಮಾಡಲು ಈ ವಾಟ್ಸಪ್ ಚಾನೆಲ್ ಅನುಕೂಲವಾಗಿದೆ.ಪ್ರಧಾನಿಗಳು ಸಹ ವಾಟ್ಸಪ್ ಚಾನೆಲ್ ನ್ನ ಅಧಿಕೃತ ಚಾನೆಲ್ ಆರಂಭಿಸಿದ್ದಾರೆ. ಮೂಲ ಉದ್ದೇಶ, ಸಾರ್ವಜನಿಕರು ಸ್ಪಂಧನೆಗೆ ಈ ಚಾನೆಲ್ ಅನುಕೂಲವಾಗಲಿದೆ. ಸಾರ್ವಜನಿಕ ಬದುಕನ್ನ ಶಿವಮೊಗ್ಗದ ಜನತೆ ಜೊತೆ ಇರುವುದರಿಂದ ವಿಶೇಷ ಸಂಗತಿಯನ್ನ‌ ವಿಶೇಷವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದರು.

ಸಂಸದರಿಂದ ಉತ್ತಮ ಕೆಲಸ| ಕಿಮ್ಮನೆ ಜಯರಾಂ

ಕಿಮ್ಮನೆ ರೆಸಾರ್ಟ್ ನ ಮಾಲೀಕ ಕಿಮ್ಮನೆ ಜಯರಾಮ್, ಜಿಲ್ಲೆಯಲ್ಲಿ ರಾಘವೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ನನಗೆ ಆಸಕ್ತಿಯಿರಲಿಲ್ಲ. ಸಾಮಾಜಿಕ ಜಾಲತಾಣ ಇಂದು ಸಾರ್ವಜನಿಕ‌ ಸಂಪರ್ಕ ಸಾಧಿಸಲು ಅನಿವಾರ್ಯವಾಗಿದೆ. ಉತ್ತಮ ಕೆಲಸಗಳು ಸಾರ್ವಜನಿಕರನ್ನ‌ ಸಂಪರ್ಕಿಸಲು ಸಾಧ್ಯವಾಗಿದೆ. ವಿಮಾನ ನಿಲ್ದಾಣ ಆರಂಭಿಸಿ ಸಂಸದರು ಉತ್ತಮ ಕೆಲಸ ಮಾಡಿದ್ದಾರೆ.

ನಾನು ವಿಮಾನ‌ಹಾರಾಟ ಆರಂಭವಾದಾಗಿನಿಂದ 10 ಬಾರಿ ಬೆಂಗಳೂರು ಶಿವಮೊಗ್ಗ ನಡುವೆ ಸಂಚಾರ ಮಾಡಿದ್ದೇನೆ.  ವಿಮಾನ ಸದಾ ತುಂಬಿರುತ್ತದೆ. ಮಲೆನಾಡಿಗೆ ಇದು ಉತ್ತಮವಾಗಿದೆ. ಜೊತೆಗೆ ಐದಾರು ಜಿಲ್ಲೆಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಇದು ಫಲಕೊಡಲಿದೆ ಎಂದರು.‌

ಎಂಲ್ ಸಿ ರುದ್ರೇಗೌಡ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಮೇಯರ್ ಶಿವುಕುಮಾರ್  ಹಾಜರಿದ್ದರು.

ಸುದ್ದಿಗೋಷ್ಠಿಯ ನಂತರ ವಾಟ್ಸಪ್ ಚಾನೆಲ್ ನ ವಿಟಿ ಪ್ರದರ್ಶನ ನಡೆಯಿತು. ಪೋಸ್ಟರ್ ರಿಲೀಸ್ ನ್ನು ಬಿಡುಗಡೆ ಮಾಡಲಾಯಿತು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24 ಎಕರೆ ತೆರವು!

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24…

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *