ತಾಲ್ಲೂಕುಹೊಸನಗರ

ನಿಟ್ಟೂರು | ಜೇನು ಕೃಷಿ ಕಾರ್ಯಾಗಾರಕ್ಕೆ ಚಾಲನೆ | ಜೇನು ಕೃಷಿಯಿಂದ ವಿವಿಧ ಬೆಳೆಗಳ ಉತ್ತಮ ಇಳುವರಿ

ನಿಮ್ಮೂರಿನ ಸುದ್ದಿ ನಮಗೆ ಕಳುಹಿಸಿ 7899128099

ಹೊಸನಗರ: ಜೇನು ಕೃಷಿ ರೈತರಿಗೆ ಆರ್ಥಿಕ ಚೈತನ್ಯ ನೀಡುವುದರ ಜೊತೆಗೆ ಪರಿಸರ ಮತ್ತು ವಿವಿಧ ಬೆಳೆಗಳ ಉತ್ತಮ ಬೆಳವಣಿಗೆಗೆ ಪೂರಕ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಸಿ.ಪುಟ್ಟನಾಯ್ಕ ತಿಳಿಸಿದರು.

ತಾಲೂಕಿನ ನಿಟ್ಟೂರು ಗ್ರಾಪಂ ಸಭಾಂಗಣದಲ್ಲಿ ತೋಟಗಾರಿಕಾ ಇಲಾಖೆ, ಮಲೆನಾಡು ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಜೇನು ಕೃಷಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಸಾಗರ ಮಲೆನಾಡು ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಾನಂದ ಕುಗ್ವೆ, ವೈಜ್ಞಾನಿಕವಾಗಿ ಜೇನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಗಮನ ಕೇಂದ್ರೀಕರಿಸಿದರೆ ಉತ್ತಮ ಲಾಭ ಕೂಡ ಪಡೆಯಬಹುದು. ಮತ್ತು ಜೇನು ಕೃಷಿಯಿಂದಾಗುವ ಪರಾಗಸ್ಪಷ್ಟ ಕೂಡ ರೈತರ ಎಲ್ಲಾ ಕೃಷಿಗಳಿಗೆ ಸಹಕಾರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೂರು ಗ್ರಾಪಂ ಅಧ್ಯಕ್ಷೆ ವಿನೋದ, ಜೇನು ಕೃಷಿಗೆ ಹೇರಳವಾದ ಜಮೀನು ಬೇಕಿಲ್ಲ. ಮನೆಹಿತ್ತಲಿನಲ್ಲೂ ಮಾಡಬಹುದು. ಬಂದ ತುಪ್ಪ ಮಾರಾಟ ಮಾಡುವ ಜೊತೆಗೆ ಸೊಸೈಟಿಗಳ ಮೂಲಕ ಸಾಲವನ್ನು ಪಡೆಯಬಹುದು. ಜೀವನ ನಿರ್ವಹಣೆಗೂ ಸಹಕಾರಿ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ವಿಘ್ನೇಶ ತಲಕಾಲಕೊಪ್ಪ ಉಪನ್ಯಾಸ ನೀಡಿದರು.

ಬುಡಕಟ್ಟು ಒಕ್ಕೂಟದ ರಾಜ್ಯ ಸಂಚಾಲಕ ರಾಮಣ್ಣ ಹಸಲರು, ಗ್ರಾಪಂ ಸದಸ್ಯರಾದ ಚಂದ್ರಾವತಿ ಶೆಟ್ಟಿ, ಲಕ್ಷ್ಮಮ್ಮ, ಸಚಿನ್, ವೆಂಕಟರಮಣ ಉಪಸ್ಥಿತರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *