ಶಿವಮೊಗ್ಗ ಜಿಲ್ಲೆತಾಲ್ಲೂಕುಶಿವಮೊಗ್ಗಸಾಗರಹೊಸನಗರ

ಗ್ರಾಮಸ್ಥರಿಂದಲೇ ರಸ್ತೆ ರಿಪೇರಿ | ಗ್ರಾಮಾಡಳಿತದ ವಿರುದ್ಧ ಆಕ್ರೋಶ | ನಿಟ್ಟೂರು ಕಲ್ಯಾಣಿಚೌಕದಲ್ಲಿ ಘಟನೆ

ಗ್ರಾಮಸ್ಥರಿಂದಲೇ ರಸ್ತೆ ರಿಪೇರಿ | ಗ್ರಾಮಾಡಳಿತದ ವಿರುದ್ಧ ಆಕ್ರೋಶ | ನಿಟ್ಟೂರು ಕಲ್ಯಾಣಿಚೌಕದಲ್ಲಿ ಘಟನೆ

ಹೊಸನಗರ: ತಾಲೂಕಿನ ನಿಟ್ಟೂರು ಸಮೀಪದ ಹೆಬ್ಬಿಗೆ, ಬರುವೆ ಸಂಪರ್ಕಿಸುವ ಕಲ್ಯಾಣಿಚೌಕ ರಸ್ತೆ ನಿರಂತರ ಮಳೆಯಿಂದ ಕೆಸರು ಗದ್ದೆಯಾಗಿದ್ದು, ಗ್ರಾಮಾಡಳಿತ ಈ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಕಲ್ಯಾಣಿ ಚೌಕ ಗ್ರಾಮಸ್ಥರೇ ರಸ್ತೆಗೆ ಕಲ್ಲು ತಂದು ಹಾಕಿ ರಿಪೇರಿ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ಶಾಲಾ ಕಾಲೇಜು ವಿಧ್ಯಾರ್ಥಿಗಳು ಸೇರಿದಂತೆ ಸೇರಿದಂತೆ ಪ್ರತಿದಿನ ಕನಿಷ್ಠ 300 ರಿಂದ 400 ಜನರು ಓಡಾಡುವ ಕಲ್ಯಾಣಿ ಚೌಕ ರಸ್ತೆಯ 3.5 ಕಿಮಿ ಇದ್ದು, ಕಳೆದ 4 ವರ್ಷಗಳ ಹಿಂದೆ 1.5 ಕಿಮಿ ಮಾತ್ರ ಸರ್ವ ಋತು ರಸ್ತೆ ಮಾಡಲಾಗಿದೆ. ಉಳಿದ 1.5 ಕಿಮಿ ಕಚ್ಚಾ ರಸ್ತೆಯಾಗಿದ್ದು ಓಡಾಡಲು ಸಾದ್ಯವೇ ಇಲ್ಲ ಎನ್ನುವಂತಾಗಿದೆ.

ಮಳೆಗಾಲದಲ್ಲಂತೂ ಅಕ್ಷರಶಃ ಕೆಸರು ಗದ್ದೆಯಾಗಿ ಓಡಾಟ ನಡೆಸುವವರು ಇನ್ನಿಲ್ಲದ ಪರಿಪಾಟಲು ಅನುಭವಿಸಿವಂತಾಗಿದೆ. ಶಾಸಕರಿಗೆ ಮತ್ತು ಗ್ರಾಮಪಂಚಾಯಿತಿಗೆ ಸಾಕಷ್ಟು ಭಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ವಾಗದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ತಾವೇ ಸೇರಿ ವಾಹನದಲ್ಲಿ ಕಲ್ಲನ್ನು ತಂದು ಕೆಸರಾದ ಜಾಗಕ್ಕೆ ಹಾಕಿ ಸರಿಪಡಿಸಿಕೊಂಡಿದ್ದಾರೆ.

ಜನ ಓಡಾಟ ನಡೆಸಲು ಸಾದ್ಯವಾಗದೇ ಪರದಾಡುತ್ತಿದ್ದರೂ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೌನವಾಗಿರುವ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಸರ್ಗದಾಮ ಮಂಜುನಾಥ, ಶಾಸ್ತ್ರಿ, ಕೃಷ್ಣ ಕಲ್ಯಾಣಿಚೌಕ, ಸುದೀಂಧ್ರ ಕಲ್ಯಾಣಿ ಚೌಕ. ನಾಗರಾಜ ಕಲ್ಯಾಣಿ ಚೌಕ, ಇತರರು ಹಾಜರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24 ಎಕರೆ ತೆರವು!

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24…

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *