ಶಿವಮೊಗ್ಗ ಜಿಲ್ಲೆತಾಲ್ಲೂಕುತೀರ್ಥಹಳ್ಳಿಶಿವಮೊಗ್ಗಸಾಗರಹೊಸನಗರ

SHIMOGA| ಚಕ್ರಾ ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಪುನರ್ವಸತಿ ಹೋರಾಟ ಸಮಿತಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ, ಭೂಕಬಳಿಕೆ, ಲ್ಯಾಂಡ್ ಗ್ರಾಬಿಂಗ್ ಮಾಡಿ ಮಾರಾಟ ಮಾಡಿದ ಆರೋಪ | ಸೋಶಿಯಲ್ ಜಸ್ಟಿಸ್ ಪಬ್ಲಿಕ್ಸ್ ಪ್ರಾಬ್ಲಮ್ಸ್ ನ ರಿಯಾಜ್ ಅಹಮದ್ ದೂರು

SHIMOGA| ಚಕ್ರಾ ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಪುನರ್ವಸತಿ ಹೋರಾಟ ಸಮಿತಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ, ಭೂಕಬಳಿಕೆ, ಲ್ಯಾಂಡ್ ಗ್ರಾಬಿಂಗ್ ಮಾಡಿ ಮಾರಾಟ ಮಾಡಿದ ಆರೋಪ | ಸೋಶಿಯಲ್ ಜಸ್ಟಿಸ್ ಪಬ್ಲಿಕ್ಸ್ ಪ್ರಾಬ್ಲಮ್ಸ್ ನ ರಿಯಾಜ್ ಅಹಮದ್ ದೂರು

ಶಿವಮೊಗ್ಗ: ಚಕ್ರಾ ಸಾವೆಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿತಿಯ ಹೆಸರಿನಲ್ಲಿ ಅಧ್ಯಕ್ಷ ಸುಬ್ರಮಣ್ಯ ಬಿನ್ ಗೋವಿಂದಪ್ಪ ಮತ್ತು ಉಪಾಧ್ಯಕ್ಷ ಆರ್ ಉಮೇಶ್ ರವರು ಸರ್ಕಾರಕ್ಕೆ ಸರ್ಕಾರಿ ಅಧಿಕಾರಿಗಳಿಗೆ ತಪ್ಪು ಸುಳ್ಳು ಮಾಹಿತಿ ನೀಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಲ್ಯಾಂಡ್ ಗ್ರಾಬಿಂಗ್ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪಿಸಿ ಸೋಶಿಯಲ್ ಜಸ್ಟಿಸ್ ಪಬ್ಲಿಕ್ ಪ್ರಾಬ್ಲಮ್ಸ್ ನ ರಿಯಾಜ್ ಅಹಮದ್ ಈ ಸಂಬಂಧ ಗುರುವಾರ ಸರ್ಕಾರಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ದೂರು ನೀಡಲಾಗಿದೆ.

ದೂರಿನಲ್ಲಿ ಏನಿದೆ?

ಶಿವಮೊಗ್ಗದ ಅಗಸವಳ್ಳಿ ಗ್ರಾಮ ಸರ್ವೆ ನಂಬರ್ 167 ರಲ್ಲಿ 2033 ಎಕರೆ ಜಮೀನಿದ್ದು ಅದರಲ್ಲಿ 1144 ಎಕರೆ ಜಮೀನನ್ನು ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ಹಂಚಿಕೆ ಮಾಡಿದ್ದು ಅದರಲ್ಲಿ ಕೆಲವರು ವಾಸುಸುತ್ತಿದ್ದು ಇನ್ನು ಕೆಲವರು ಮಾರಾಟ ಮಾಡಿದ್ದು ಇನ್ನು ಕೆಲವರು ಜಮೀನು ನಿವೇಶನ ಪಡೆದ ಇರುತ್ತಾರೆ ಆದರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಸುಬ್ರಮಣ್ಯ ಉಮೇಶ ಮತ್ತು ಇತರರು 60, 70 ವರ್ಷಗಳಿಂದ ಬಗರ್ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿರುವಂತಹ ರೈತರ ಜಮೀನಿಗೆ ತಂತಿ ಬೇಲಿಯನ್ನು ಅಳವಡಿಸಿ ಜಾಗವನ್ನು ವಶಕ್ಕೆ ಪಡೆದುಕೊಂಡು ಸರ್ಕಾರಕ್ಕೆ ಸರ್ಕಾರದ ಅಧಿಕಾರಿಗಳಿಗೆ ಸುಳ್ಳು ಮಾಹಿತಿಯನ್ನು ನೀಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸುಳ್ಳು ಪ್ರಕರಣಗಳನ್ನು ಹಾಕಿಸಿ ಭೂಕಬಳಿಕೆ ಮಾಡಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಬೇಲಿ ಹಾಕುವ ವೇಳೆ ಅಧಿಕಾರಿಗಳಿಲ್ಲ:

2 ಎಕರೆ 3 ಎಕರೆ ಮುಳುಗಡೆ ಸಂತ್ರಸ್ತರ ದಾಖಲೆಗಳಿದ್ದರೆ 40 /50 ಎಕರೆ ಜಾಗಕ್ಕೆ ತಂತಿ ಬೇಲಿ ಅಳವಡಿಸಿರುತ್ತಾರೆ. ಇವರು ಭೂಮಿಯನ್ನು ಅತಿಕ್ರಮ ಮಾಡಿ ತಂತಿ ಬೇಲಿ ಹಾಕುವ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳು ಇರುವುದಿಲ್ಲ. ಸರ್ಕಾರ ಆರು ದಶಕಗಳಿಂದ ಭೂ ವಂಚಿತರಾಗಿ ಅರಣ್ಯ ಭೂಮಿಯಲ್ಲಿ ಸಾಗುವಳಿ‌ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಶರಾವತಿ, ವರಾಹಿ, ಚಕ್ರಾ, ಸಾವೇಹಕ್ಲು ಮುಳುಗಡೆ ಸಂತ್ರಸ್ತರ ಮತ್ತು ಬಗರ್‌ ಹುಕುಂ ಸಾಗುವಳಿದಾರರಿಗಾಗಿ ಎಂದು ವಿಶೇಷ ಸಮಿತಿ, ಮತ್ತು ಸರ್ಕಾರ ವಿಶೇಷ ಜಿಲ್ಲಾಧಿಕಾರಿ ನೇಮಿಸಲು ಸಮ್ಮತಿ ನೀಡಿದೆ.

ವಿಶೇಷ ಜಿಲ್ಲಾಧಿಕಾರಿ. ಸಹಾಯಕ ಅರಣ್ಯಾಧಿಕಾರಿ, ಏಳು ಜನ ಸರ್ವೆಯರ್‌ಗಳು, ದ್ವಿತೀಯ ದರ್ಜೆ ಸಹಾಯಕರು ಸಮಿತಿಯಲ್ಲಿ ಇರುತ್ತಾರೆ. ಸಮಿತಿ ಇಲ್ಲದೆ ಇರುವುದರಿಂದ ಸುಬ್ರಮಣ್ಯ ಉಮೇಶ ಮತ್ತು ಇತರರು ಬಗರ್‌ ಹುಕುಂ ಸಾಗುವಳಿದಾರರ ಭೂಮಿಯನ್ನು ಕಿತ್ತುಕೊಳ್ಳಲು ಇವರದೇ ಸಮಿತಿಯನ್ನು ಮಾಡಿಕೊಂಡಿರುತ್ತಾರೆ ಅದರಿಂದ ತಾವುಗಳು ತಕ್ಷಣವೇ ಈ ವಿಚಾರವಾಗಿ ಸೂಕ್ಷ್ಮವಾಗಿ ಸೂಕ್ತವಾಗಿ ಪರಿಶೀಲಿಸಿ ವಿಶೇಷ ನ್ಯಾಯಾಧೀಶರನ್ನು ನೇಮಕ ಮಾಡಿ ಭೂಮಿಯಲ್ಲಿ ಸಾಗುವಳಿ‌ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಶರಾವತಿ, ವರಾಹಿ, ಚಕ್ರಾ, ಸಾವೇಹಕ್ಲುಮುಳುಗಡೆ ಸಂತ್ರಸ್ತರ ಮತ್ತು ಬಗರ್‌ ಹುಕುಂ ಸಾಗುವಳಿದಾರರಿಗಾಗಿ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಲಾಗಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *