ತಾಲ್ಲೂಕುಕ್ರೈಂತೀರ್ಥಹಳ್ಳಿಭದ್ರಾವತಿಶಿಕಾರಿಪುರಶಿರಾಳಕೊಪ್ಪ

ಹೊಸನಗರ| ಪಟಾಕಿ ಅಂಗಡಿಗಳ ಮೇಲೆ ತಹಶೀಲ್ದಾರ್, ಸಿಪಿಐ ಜಂಟಿ ದಾಳಿ | ಪರಿಶೀಲನೆ ಜೊತೆ ಜಾಗೃತಿ ಮೂಡಿಸಿದ ಅಧಿಕಾರಿಗಳು

ಪಟಾಕಿ ಅಂಗಡಿಗಳ ಮೇಲೆ ದಿಢೀರ್ ದಾಳಿ
ಹೊಸನಗರ: ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ ಮತ್ತು ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಗುರುವಾರ ಜಂಟಿ ದಿಢೀರ್ ದಾಳಿ ನಡೆಸಿದರು.
ಪಟ್ಟಣದ ಹಲವು ಅಂಗಡಿಗಳಿಗೆ ತೆರಳಿ ಪರಿಶೀಲಿಸಿದ ಅಧಿಕಾರಿಗಳು, ಸರ್ಕಾರದಿಂದ ಪರವಾನಿಗೆ ಪಡೆದುಕೊಂಡವರು ಸುರಕ್ಷಿತ ಕ್ರಮಗಳನ್ನು ಪಾಲಿಸಿ ಗ್ರೀನ್ ಪಟಾಕಿಗಳನ್ನು ಮಾರಬೇಕು. ಯಾವುದೇ ಕಾರಣಕ್ಕು ಅಪಾಯಕಾರಿ ಪಟಾಕಿಗಳನ್ನು ಮಾರದಂತೆ ತಾಕೀತು ಮಾಡಿದರು.
ಅನಧಿಕೃತವಾಗಿ ಪಟಾಕಿ ಮಾರಾಟ, ಶೇಖರಣೆ ಮತ್ತು ಸಾಗಾಟ ಮಾಡುವುದು ಅಪರಾಧ ಒಂದು ವೇಳೆ ಅಂತಹ ಘಟನೆ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು
ಪಟಾಕಿ ನಿರ್ವಹಣೆ ಮತ್ತು ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು.
ಅಗ್ನಿಶಾಮಕ ದಳ ಮತ್ತು ತಾಪಂ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *