ಶಿವಮೊಗ್ಗತಾಲ್ಲೂಕುಹೊಸನಗರ

ಹೊಸನಗರ ಪಿಯು ಕಾಲೇಜು ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಬಿದನೂರಿನಲ್ಲಿ ಸ್ವಚ್ಚತಾ ಕಾರ್ಯ | ನಿಯೋಜನಾಧಿಕಾರಿ ಕೆ.ಟಿ.ಶ್ರೀಧರ್ ನೇತೃತ್ವ |ಪ್ರಾಂಶುಪಾಲ ಸ್ವಾಮಿರಾವ್, ಉಪನ್ಯಾಸಕರ ಸಹಕಾರ

  • ಹೊಸನಗರ ಪಿಯು ಕಾಲೇಜು ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಬಿದನೂರಿನಲ್ಲಿ ಸ್ವಚ್ಚತಾ ಕಾರ್ಯ | ನಿಯೋಜನಾಧಿಕಾರಿ ಕೆ.ಟಿ.ಶ್ರೀಧರ್ ನೇತೃತ್ವ |ಪ್ರಾಂಶುಪಾಲ ಸ್ವಾಮಿರಾವ್, ಉಪನ್ಯಾಸಕರ ಸಹಕಾರ

ಹೊಸನಗರ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್ ರಾಷ್ಷ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ತಾಲೂಕಿನ ಬಿದನೂರು ನಗರದ ಬೀದಿಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.

ಗುರುವಾರ ಬೆಳಿಗ್ಗೆಯಿಂದ ಇತಿಹಾಸ ಪ್ರಸಿದ್ಧ ಕೋಟೆಯ ಹೊರಾಂಗಣ, ಮಸೀದಿ ರಸ್ತೆ, ನಗರ ನಿಲ್ದಾಣ ಮತ್ತು ಪಂಚಾಯ್ತಿ ರಸ್ತೆಯ ಬೀದಿಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.
ಎನ್ಎಸ್ಎಸ್ ಘಟಕದಲ್ಲಿ ರಚಿಸಲಾದ ಕಾವೇರಿ, ಯಮುನಾ, ಶರಾವತಿ, ಕಪಿಲಾ, ಸಿಂಧು ಸೇರಿದಂತ ವಿವಿಧ ಗುಂಪುಗಳ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಕರುಣಾಕರಶೆಟ್ಟಿ ಸ್ವಚ್ಚತಾ ಕಾರ್ಯಕ್ಕೆ ವಾಹನದ ನೆರವು ನೀಡಿದರು.

ಎನ್ಎಸ್ಎಸ್ ನಿಯೋಜನಾಧಿಕಾರಿ ಕೆ.ಟಿ.ಶ್ರೀಧರ್, ಉಪನ್ಯಾಸಕರಾದ ಅಶೋಕಶೆಟ್ಟಿ ದೇವಗಂಗೆ, ಮಹಾಂತೇಶ್ ಗೌಡ, ಟೀಕೇಶ್ ಗೌಡ, ಸಂತೋಷ್ ಎನ್,ಹೊಸನಗರ, ಸೀಮಾ ಟಿ, ರೂಪಾ ಎಸ್ ಭಾಗವಹಿಸಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *