ಹೊಸನಗರತಾಲ್ಲೂಕು

ಆತ್ಮಹತ್ಯೆಗೆ ಶರಣಾದ ಕಿಳಂದೂರು ಮೃತ ಕೃಷ್ಣಪ್ಪಗೌಡ ಮನೆಗೆ ತೋಟಗಾರಿಕಾ ಅಧಿಕಾರಿಗಳು ಭೇಟಿ

ಹೊಸನಗರ: ಅಡಿಕೆ ಎಲೆಚುಕ್ಕಿ ರೋಗ ಬಾಧೆಗೆ ಬೆದರಿ ಆತ್ಮಹತ್ಯೆಗೆ ಶರಣಾದ ಕಿಳಂದೂರು ಗ್ರಾಮದ ಮೃತ ಕೃಷ್ಣಪ್ಪಗೌಡ ಮನೆಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪುಟ್ಟನಾಯ್ಕ್, ಕಿರಿಯ ಸಹಾಯಕ ನಿರ್ದೇಶಕ ಕರಿಬಸವ ನಾಯ್ಕ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬಳಿಕ ಗ್ರಾಮಸ್ಥರ ಸಮಕ್ಷಮದಲ್ಲಿ ತೋಟಗಾರಿಕಾ ಬೆಳೆಯ ಮಹಜರು ನಡೆಸಿದರು.

ತೋಟಗಾರಿಕಾ ಅಧಿಕಾರಿ ಪುಟ್ಟ ನಾಯ್ಕ ಮಾತನಾಡಿ, ಅಡಿಕೆ ಎಲೆಚುಕ್ಕೆ ರೋಗದ ಆತಂಕ ಬೇಡ. ಎಲ್ಕವನ್ನು ಸಮರ್ಥವಾಗಿ ಎದುರಿಸಬೇಕು ನಾವು ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದರು. ವರದಿಯನ್ನು ಕೂಡಲೇ ಸರ್ಕಾರಕ್ಕೆ ಒಪ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಪ್ರಮುಖರಾದ ಯೋಗೇಂದ್ರ, ದೇವೇಂದ್ರ, ಮೃತರ ಮಕ್ಕಳಾದ ಸತೀಶ್, ಅರುಣ್ ಮತ್ತು ಕುಟುಂಬಸ್ಥರು, ಸ್ಥಳೀಯರು ಇದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *