ಶಿವಮೊಗ್ಗಪ್ರಮುಖ ಸುದ್ದಿಸಾಗರಹೊಸನಗರ

ರಾಜ್ಯದಲ್ಲಿ ಜಾರಕಿಹೊಳಿಗೆ ಒಂದು ನ್ಯಾಯ..ಸ್ವಾಮೀಜಿಗಳಿಗೆ ಒಂದು ನ್ಯಾಯ ಇದೆಯೇ..? | ಸರ್ಕಾರವನ್ನು ಪ್ರಶ್ನಿಸಿದ ಮಾಜಿ ಶಾಸಕ ಬೇಳೂರು

ಶಿವಮೊಗ್ಗ.09: ಸಚಿವ ರಮೇಶ್ ಜಾರಕಿಹೊಳಿಗೆ ಒಂದು ಕಾನೂನು, ಸ್ವಾಮೀಜಿಗೆ ಒಂದು ಕಾನೂನು ಇದೆಯೇ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಸರ್ಕಾರ ತಮ್ಮ ಸಚಿವರನ್ನು ರಕ್ಷಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡಿ, ಅವರನ್ನು ನಿರಪರಾಧಿ ಎಂದು ತೀರ್ಮಾನಿಸಿತು. ಆದರೆ ಸ್ವಾಮೀಜಿ ವಿಚಾರದಲ್ಲಿ ಅವರನ್ನು ನೇರವನ್ನು ಬಂಧಿಸಿತು. ಸ್ವಾಮೀಜಿ ಅವರು ಮಾಡಿದ್ದು ತಪ್ಪೆ ಆದರೆ ರಾಜ್ಯದಲ್ಲಿ ಸಚಿವರಿಗೊಂದು ಕಾನೂನು, ಸ್ವಾಮೀಜಿಗೊಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದರು.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡದೆ ಸ್ಥಳೀಯ ಪೊಲೀಸರಿಂದ ತನಿಖೆ ಮಾಡಿಸಿದರು. ಬಿ ರಿಪೋರ್ಟ್ ಕೊಡಿಸಿದರು. ಈಗ ಈಶ್ವರಪ್ಪ ಅವರು ಹಿಂದುತ್ವ ಎಂದು ಭಾಷಣ ಮಾಡುತ್ತಿದ್ದಾರೆ.

ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರು ಎಂದು ಅವರನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಪಕ್ಷ ಉಳಿಯಬೇಕು, ಅಧಿಕಾರ ಬೇಕು, ಹಣ ಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ, ಮಾಜಿ ತಾ.ಪಂ ಸದಸ್ಯರಾದ ಸೋಮಶೇಖರ್ ಲಾವಿಗೇರೆ, ನಾಗರಾಜ್, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಇದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *