
BREAKING NEWS |ಸರ್ಕಾರಿ KSRTC ಬಸ್ಸಿನ ಮೇಲೆ ವಿದ್ಯುತ್ ಕಂಬ !
ಹೊಸನಗರ: ಬಿರುಗಾಳಿ ಮಳೆಗೆ ಮುಂಜಾನೆ ಚಲಿಸುತ್ತಿದ್ದ KSRTC ಬಸ್ಸಿನ ಮೇಲೆ ವಿದ್ಯುತ್ ಕಂಬ ಎರಗಿದ ಘಟನೆ ತಾಲೂಕಿನ ಸಂಪೇಕಟ್ಟೆ ನಿಟ್ಟೂರು ಮದ್ಯದಲ್ಲಿ ನಡೆದಿದೆ
ಬಸ್ಸಿನ ಒಂದು ಬದಿಗೆ ವಿದ್ಯುತ್ ಕಂಬ, ಲೈನ್ ಜೊತೆಗೆ ಬಿದ್ದರು ಕೂಡ ಕರೆಂಟ್ ಇಲ್ಲದ ಕಾರಣ ಯಾವುದೇ ಅನಾಹುತವಾಗಿಲ್ಲ..
ಬೆಂಗಳೂರಿನಿಂದ ಹೊಸನಗರ ನಗರ ಮಾರ್ಗವಾಗಿ KSRTC ಬಸ್ಸು ನಿಟ್ಟೂರು ಕಡೆ ತೆರಳುವಾಗ ಈ ಘಟನೆ ನಡೆದಿದೆ. ಸ್ಥಳಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬ ಲೈನ್ ತೆರವುಗೊಳಿಸಿ, ಬಸ್ಸು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
