ಹೊಸನಗರತಾಲ್ಲೂಕುಶಿವಮೊಗ್ಗ

ಎಲೆಚುಕ್ಕೆ ರೋಗ ಬಾಧೆಗೆ ಸಿಲುಕಿ ರೈತನ ಆತ್ಮಹತ್ಯೆ ಪ್ರಕರಣ | ಕಿಳಂದೂರಿಗೆ ಕೃಷಿ ಅಧಿಕಾರಿಗಳ‌ ಭೇಟಿ, ಕೃಷಿ ಜಮೀನು ಪರಿಶೀಲನೆ

ಹೊಸನಗರ: ಅಡಿಕೆಗೆ ಎಲೆಚುಕ್ಕೆ ರೋಗ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಕಿಳಂದೂರು ಮೃತ ಕೃಷ್ಣಪ್ಪ ಗೌಡ ಜಮೀನಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಗುಡ್ ಮಾರ್ನಿಂಗ್ ಕರ್ನಾಟಕ.ಕಾಂ ನಲ್ಲಿ ಎಲೆಚುಕ್ಕೆ ರೋಗ ಬಾಧೆ, ಮಲೆನಾಡಲ್ಲಿ ಮೊದಲ ಬಲಿ ಸುದ್ದಿ ಪ್ರಕಟ ಆಗುತ್ತಿದ್ದಂತೆ ಕೃಷಿ ಅಧಿಕಾರಿಗಳು ದೌಡಾಯಿಸಿದ್ದಾರೆ.

ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಂದೂರು ಗ್ರಾಮಕ್ಕೆ ಭೇಟಿ ನೀಡಿದ ಕೃಷಿ ಅಧಿಕಾರಿಗಳಾದ ಶರಣಪ್ಪ, ವಾಸುಕಿ ತಂಡ ಮೃತರ ಕುಟುಂಬದಿಂದ ಮಾಹಿತಿ ಪಡೆದರು.

ಬಳಿಕ ಕೃಷಿ ಜಮೀನಿಗೆ ಭೇಟಿಕೊಟ್ಟು ಬೆಳೆಹಾನಿಯನ್ನು ಅವಲೋಕಿಸಿದರು. ಬಳಿಕ ಮಾತನಾಡಿ ಕೃಷಿ ಅಧಿಕಾರಿ ಶರಣಪ್ಪ, ಈಗಾಗಲೇ ಕೃಷಿ ಜಮೀನನ್ನು ಪರಿಶೀಲಿಸಲಾಗಿದ್ದು, ಮಹಜರು ನಡೆಸಲಾಗಿದೆ. ಈ ಸಂಬಂಧ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಲಾಗುವುದು ಎಂದರು.

ಈ ವೇಳೆ ಮೃತ ಕೃಷ್ಣಪ್ಪ ಗೌಡರ ಕುಟುಂಬವರ್ಗ, ಸಂಬಂಧಿಕರು ಮತ್ತು ಸ್ಥಳೀಯರು ಹಾಜರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *