ಕ್ರೈಂತಾಲ್ಲೂಕುಹೊಸನಗರ

ಒಂದಾಯ್ತು..ಎರಡಾಯ್ತು.. ಬೆಳಕಿಗೆ ಬಂತು ಮತ್ತೊಂದು ವಿದ್ಯಾಸಂಸ್ಥೆಯ ಕಳ್ಳತನದ ಪ್ರಯತ್ನ

ಹೊಸನಗರ: ಒಂದಾಯ್ತು.. ಎರಡಯಾಯ್ತು.. ಬೆಳಕಿಗೆ ಬಂತು ಮತ್ತೊಂದು ವಿದ್ಯಾಸಂಸ್ಥೆಯ ಪ್ರಕರಣ.

ಹೌದು ಕೊಡಚಾದ್ರಿ ಪದವಿ ಕಾಲೇಜು, ನಗರ ಅಮೃತ ವಿದ್ಯಾಲಯದ ಕಳ್ಳತನದ ಬಳಿಕ ನಗರ ವಿದ್ಯಾಸಂಸ್ಥೆಯ ಹೈಸ್ಕೂಲು ವಿಭಾಗದಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಹೈಸ್ಕೂಲ್ ಆಫೀಸ್ ಛೇಂಬರ್ ಮತ್ತು ವಿಜ್ಞಾನ ರೂಂನ ಬಾಗಿಲಿನ ಬೀಗ ಒಡೆದು ಒಳಗಿನ ಬೀರುಗಳನ್ನು ಜಾಲಾಡಿದ್ದಾರೆ.

ನಗರ ಠಾಣೆ ಪಿಎಸ್ಐ ನಾಗರಾಜ್ ಸ್ಥಳ ಪರಿಶೀಲನೆ ನಡೆಸಿದರು.

ಒಟ್ಟಾರೆ ಶಾಲಾ ಕಾಲೇಜನ್ನು ಕೇಂದ್ರವಾಗಿಟ್ಟು ಕಳ್ಳತನ ನಡೆಸುತ್ತಿರುವುದು ಪೊಲೀಸರಿಗೆ ತಲೆನೋವು ತಂದಿದೆ.

ಶಾಲಾ ಕಾಲೇಜುಗಳಲ್ಲಿ ಭದ್ರಾತಾ ಸಿಬ್ಬಂದಿ ಮತ್ತು ಸಿಸಿಟಿವಿ ನಿರ್ವಹಣೆಯಲ್ಲಿ ನಿರ್ಲಕ್ಷತನ ತೋರುತ್ತಿರುವುದು ಕಂಡು ಬಂದಿದೆ.

ಹೊಸನಗರ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ಕಳ್ಳತನವಾಗಿರುವುದು ಗುಡುಗು ಸಿಡಿಲು ಬಂದು ಕರೆಂಟ್ ಇಲ್ಲದ ವೇಳೆಯಲ್ಲಿ. ನಗರದಲ್ಲೂ ಕೂಡ ಸೋಮವಾರ ರಾತ್ರಿ ಅದೇ ವಾತಾವರಣ ಇತ್ತು.

ಮೂರು ಕಳ್ಳತನಗಳು ಕೂಡ ಒಂದೇ ಮಾದರಿಯಲ್ಲಿದ್ದು ಒಂದೇ ತಂಡ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *