ಶಿವಮೊಗ್ಗ ಜಿಲ್ಲೆತಾಲ್ಲೂಕುತೀರ್ಥಹಳ್ಳಿಶಿವಮೊಗ್ಗಹೊಸನಗರ

ತೊಗರೆ ಸಂಪರ್ಕ ಸೇತುವೆ ಉದ್ಘಾಟನೆ : ನೈಜ ಸಂಕಷ್ಟ ಅರಿತ ಜನಪ್ರತಿನಿಧಿಗಳಿಂದ ಕುಗ್ರಾಮಕ್ಕೆ ಸ್ಪಂದಿಸಲು ಸಾಧ್ಯ : ಶಾಸಕ ಆರಗ ಜ್ಞಾನೇಂದ್ರ

ತೊಗರೆ ಸಂಪರ್ಕ ಸೇತುವೆ ಉದ್ಘಾಟನೆ :

ನೈಜ ಸಂಕಷ್ಟ ಅರಿತ ಜನಪ್ರತಿನಿಧಿಗಳಿಂದ ಕುಗ್ರಾಮಕ್ಕೆ ಸ್ಪಂದಿಸಲು ಸಾಧ್ಯ : ಶಾಸಕ ಆರಗ ಜ್ಞಾನೇಂದ್ರ

ಹೊಸನಗರ: ಸ್ವಾತಂತ್ರ್ಯ ಸಿಕ್ಕಿದ ದಶಕ ಹಲವು  ಕಳದರೂ ಇನ್ನೂ ಇಲ್ಲಿನ ಕುಗ್ರಾಮಗಳು ಅಭಿವೃದ್ಧಿ ಕಂಡಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು,  ಸಂಪರ್ಕ ರಸ್ತೆ ಭಾಗ್ಯ ಕಾಣುವಂತಾಗಿಲ್ಲ. ಜನಪ್ರತಿನಿಧಿಗಳು ಕುಗ್ರಾಮದ ನೈಜವಾದ ಸಂಕಷ್ಟ ಎದುರಿಸಿದ್ದರೇ ಮಾತ್ರ ಗ್ರಾಮದ ಜನ ಸ್ನೇಹಿ ಕೆಲಸ ಮಾಡಲು ಸಾಧ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗರೆ ಇಟ್ಟಕ್ಕಿ ಸಂಪರ್ಕ ರಸ್ತೆಯಲ್ಲಿ ನಿರ್ಮಾಣವಾದ ನೂತನ ಸೇತುವೆ ಕಾಮಗಾರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕುಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಆದಲ್ಲಿ ಆ ಗ್ರಾಮ ಬೆಳಕು ಕಾಣುತ್ತವೆ. ಊರಿಗೆ ಒಂದು ಅಭಿವೃದ್ಧಿ ಕಾಮಗಾರಿ ನಡೆದಲ್ಲಿ ಇಡೀ ಊರೇ ಸಂಭ್ರಮ ಪಡುತ್ತದೆ. ಊರಿನ ಜನ ಖುಷಿಯಿಂದ ನಲಿದಾಡುತ್ತಾರೆ. ಆ ಸಂಭ್ರಮವೇ ನಮಗೇ ಶ್ರೀರಕ್ಷೆ ಯಾಗುತ್ತದೆ ಎಂದರು.
ಮುಸ್ಲಿಂ ಓಲೈಕೆ ಬಜೆಟ್ :
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಕೇವಲ ಮುಸ್ಲಿಂ ಓಲೈಕೆ ಬಜೆಟ್ ಆಗಿದೆ. ಮುಸ್ಲಿಂ ಜನಾಂಗದ ಸಂಪೂರ್ಣ ಅಭಿವೃದ್ಧಿ ಮಾಡುವ ಶಪತ ತೊಟ್ಟಂತೆ ಆ ಸಮುದಾಯದವರನ್ನು ಓಲೈಸಲಾಗಿದೆ. ಎಲ್ಲದರಲ್ಲೂ ಅವರಿಗೆ ಅನುದಾನ ಹಣ ಮೀಸಲಿಡಲಾಗಿದೆ. ರಾಜ್ಯದಲ್ಲಿ ಮುಸ್ಲಿಂರು ಮಾತ್ರ ಇರುವುದೇ.  ಇಲ್ಲಿನ ಗೌಡರು, ಈಡಿಗರು, ದಲಿತರು, ಭಟ್ಟರು ಏನು ಮಾಡಿದ್ದಾರೆ. ಎಂದು ಪ್ರಶ್ನೆ ಮಾಡಿದ ಶಾಸಕರು ಇಂತಹ ನಿರ್ಲಜ್ಜ ಬಜೆಟ್ ಎಂದು ನೋಡಿರಲಿಲ್ಲ ಎಂದು ಟೀಕಿಸಿದರು.
ನಾನು ಬಡವರ ಮನೆಯಲ್ಲಿ ಹುಟ್ಟಿ ಬೆಳೆದವನು. ನನಗೆ ಬಡವರ ಕಷ್ಟ ಸುಖ ಗೊತ್ತಿದೆ. ಕ್ಷೇತ್ರದಲ್ಲಿನ ಕುಗ್ರಾಮದ ಸ್ಥಿತಿಗತಿ ಅರಿವಿದೆ. ಹಾಗಾಗಿ ಶಕ್ತಿಮೀರಿ ಕೆಲಸ ಮಾಡುತ್ತಿದ್ದೇನೆ. ಬೇರೆ ಶಾಸಕರು ಈ ವಿಭಾಗದಲ್ಲಿ ಕಣ್ಣೇತ್ತಿ ಸಹ ನೋಡಲಿಲ್ಲ. ಅವರು ಜನ ಸಾಮಾನ್ಯರಂತೆ ಯೋಚಿಸಿದ್ದರೆ ಕ್ಷೇತ್ರ ಯಾವತ್ತೋ ಸಂಪೂರ್ಣ ಅಭಿವೃದ್ಧಿ ಪಥದಲ್ಲಿ ಇರುತ್ತಿತ್ತು ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಲೀಲಾವತಿ ವಿಜೇಂದ್ರಚಾರ್, ಸದಸ್ಯರಾದ ಕೃಷ್ಣಮೂರ್ತಿ ತೊಗರೆ, ಚಂದ್ರಶೇಖರ, ಗುತ್ತಿಗೆದಾರ ಸಿ.ವಿ. ಚಂದ್ರಶೇಖರ, ಪಟ್ಟಣ ಪಂಚಾಯತಿ ಸದಸ್ಯ ಹಾಲಗದ್ದೆ ಉಮೇಶ, ನಿವೃತ್ತ ಎಇಇ ಮಲ್ಲಿಕಾರ್ಜುನ, ಸತೀಶ ತಟ್ಟಿ ಇದ್ದರು.
ಹನಿಯ ಸುಬ್ರಹ್ಮಣ್ಯ ನಿರೂಪಿಸಿದರು. ನಾ. ಶ್ರೀ. ಶಶಿಧರ ಸ್ವಾಗತಿಸಿದರು.
ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ ಕಾರ್ಯಕ್ರಮ

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ…

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!…

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ ಕಳಕಳಿ

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ…

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!…

1 of 42

Leave A Reply

Your email address will not be published. Required fields are marked *