ತೀರ್ಥಹಳ್ಳಿಹೊಸನಗರ

ಗ್ರಾಪಂ ಸದಸ್ಯೆ ಸುಮನ ಭಾಸ್ಕರ್, ಯುವ ಮುಖಂಡ ಕಿಶೋರ್ ‘ಅಮ್ಮ ಮಗ’ ಕಾಂಗ್ರೆಸ್ ಸೇರ್ಪಡೆ

ಗ್ರಾಪಂ ಸದಸ್ಯೆ ಸುಮನಾ ಕಾಂಗ್ರೆಸ್ ಸೇರ್ಪಡೆ
ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ಸದಸ್ಯರಾದ ಸುಮನ ಭಾಸ್ಕರ್ ಮತ್ತು ಅವರ ಪುತ್ರ ಕಿಶೋರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಮೂಡುಗೊಪ್ಪ ಗ್ರಾಪಂ ಚುನಾವಣೆಯಲ್ಲಿ ಪಕ್ಷೇತರವಾಗಿ ಗೆಲವು ಕಂಡ ಸುಮನ ಭಾಸ್ಕರ್, ಮತ್ತು ಯುವ ಮುಖಂಡ ಕಿಶೋರ್ ಹಿಂದೆ ಬಿಜೆಪಿಯಲ್ಲಿ ಗುರುತಿಸಿ ಕೊಂಡಿದ್ದು ನಂತರ ತಟಸ್ಥವಾಗಿ ಉಳಿದಿದ್ದರು.

ಹೊಸೂರು, ಅರಮನೆಕೊಪ್ಪ ಗ್ರಾಪಂಯ ಬೂತ್ ಮಟ್ಟದಲ್ಲಿ ಕಿಮ್ಮನೆ ಮತ್ತು ಮಂಜುನಾಥಗೌಡ ಜಂಟಿಯಾಗಿ ಇಬ್ಬರು ನಾಯಕರು ಪ್ರಚಾರಕೈಗೊಂಡಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಕರುಣಾಕರಶೆಟ್ಟಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸುಮಾ ಸುಬ್ರಹ್ಮಣ್ಯ, ಹೋಬಳಿ ಪ್ರಮುಖರು ಹಾಜರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *