ತಾಲ್ಲೂಕುಪ್ರಮುಖ ಸುದ್ದಿಹೊಸನಗರ

ಹೊಸನಗರ ಹಿಂದೂ ಮಹಾಸಭಾದಿಂದ ಅದ್ದೂರಿ ಗಣೇಶೋತ್ಸವ : ತಾಲೂಕು ಅಧ್ಯಕ್ಷ ಎಂ.ಎನ್.ರಾಜು

ಹೊಸನಗರ: ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ 4ನೇ ವರ್ಷದ ಗಣೇಶೋತ್ಸವ, ದಿನಾಂಕ 31 ಆಗಸ್ಟ್ 2022 ರ ಬೆಳಗ್ಗೆ 10 ಗಂಟೆಗೆ ಮಾವಿನಕೊಪ್ಪದ ಗಂಗಾಧರೇಶ್ವರ ದೇವಸ್ಥಾನದಿಂದ ಹಿಂದೂ ಮಹಾಸಭಾ ಬೃಹತ್ ಪ್ರತಿಷ್ಠಾಪನ ಮೆರವಣಿಗೆ ನೆಡೆಯಲಿದ್ದು ಗಣಪತಿಯನ್ನು ಪೋಸ್ಟ್ ಆಫೀಸ್ ಪಕ್ಕದ ಸಾವರ್ಕರ್ ಮಂಟಪದಲ್ಲಿ ಪ್ರತಿಷ್ಠಾಪನ ಮಾಡಲಾಗುವುದು ಹೊಸನಗರ ತಾಲೂಕು ಹಿಂದೂ ಮಹಾಸಭಾ ಅಧ್ಯಕ್ಷ ಎಂ.ಎನ್.ರಾಜು ತಿಳಿಸಿದರು.

ಹೊಸನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ,15 ದಿನಗಳ ಕಾಲ ನೆಡೆಯಲಿರುವ ಈ ಗಣೇಶೋತ್ಸವದಲ್ಲಿ ಮಕ್ಕಳಿಗೆ ಕೃಷ್ಣವೇಶ ಸ್ಪರ್ಧೆ, ಗಣಹೋಮ ಹಾಗೂ ಅನ್ನ ಸಂತರ್ಪಣೆ, ಯಕ್ಷಗಾನ, ಹಾಗೂ ಪ್ರತಿ ದಿನ ಸಂಜೆ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,

ದಿನಾಂಕ 14 ಆಗಸ್ಟ್ ಮಧ್ಯಾಹ್ನ 2 ಗಂಟೆಗೆ ಅಖಿಲ ಭಾರತ ಹಿಂದೂ ಮಹಾಸಭಾ ಗಣಪತಿಯ ಬೃಹತ್ ಶೋಭಯಾತ್ರೆ ರಾಜಬೀದಿ ಉತ್ಸವದೊಂದಿಗೆ ಹೊಸನಗರದ ಬೀದಿಗಳಲ್ಲಿ ಸಾಗಲಿದೆ ಎಂದರು.

ಗೌರವ ಅಧ್ಯಕ್ಷರಾದ  ರಾಧಾಕೃಷ್ಣ ಪೂಜಾರಿ,  ಕಾರ್ಯದರ್ಶಿ ಸಂತೋಷ್ ಉಪಸ್ಥಿತರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24 ಎಕರೆ ತೆರವು!

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24…

1 of 48

Leave A Reply

Your email address will not be published. Required fields are marked *