2 ಕೋಟಿ ವೆಚ್ಚದಲ್ಲಿ ಬಿದನೂರಿಗೆ ನೂತನ ಬಸ್ ನಿಲ್ದಾಣ | ಸಿಎಂಗೆ ಅನುದಾನ ಕೋರಿ ಪತ್ರ ಬರೆದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ

2 ಕೋಟಿ ವೆಚ್ಚದಲ್ಲಿ ಬಿದನೂರಿಗೆ ನೂತನ ಬಸ್ ನಿಲ್ದಾಣ | ಸಿಎಂಗೆ ಅನುದಾನ ಕೋರಿ ಪತ್ರ ಬರೆದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ

ಹೊಸನಗರ: ತಾಲೂಕಿನ ಬಿದನೂರು ನಗರ ಬಸ್ ನಿಲ್ದಾಣದ ಕಟ್ಟಡ ಶಿಥಿಲವಾಗಿದ್ದು ನೂತನ ನಿಲ್ದಾಣಕ್ಕೆ ರೂ.2 ಕೋಟಿ ಅನುದಾನ ಕೋರಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಹೊಸನಗರ ತಾಲ್ಲೂಕಿನ ನಗರ ಹೋಬಳಿ ಮುಖಾಂತರ ಬೆಂಗಳೂರು ನಿಂದ ಕುಂದಾಪುರ, ಭಟ್ಕಳ, ಸಿಗಂದೂರು. ಹಾಗೂ ಮಂಗಳೂರು – ಸಾಗರ, ಶಿವಮೊಗ್ಗ – ಕೊಲ್ಲೂರು ಈ ಸ್ಥಳಗಳಿಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ಸುಗಳು ಒಡಾಡುತ್ತಿದ್ದು, ಈ ಹೋಬಳಿ ಕೇಂದ್ರವು ಅತೀ ಮಳೆ ಬೀಳುವ ಪ್ರದೇಶವಾಗಿದೆ. ಹಾಲಿ ಇರುವ ಬಸ್ ನಿಲ್ದಾಣವು ಶಿಥಿಲಾವಸ್ಥೆಯಲ್ಲಿದ್ದು ಸಮರ್ಪಕ ಬಸ್ ನಿಲ್ದಾಣ ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲದೇ ಪ್ರಯಾಣಿಕರಿಗೆ ತೊಂದರೆಯಾಗಿತ್ತಿರುವುದರಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹೊಸನಗರ ತಾಲ್ಲೂಕಿನ ನಗರದಲ್ಲಿ ನೂತನ ಬಸ್ ನಿಲ್ದಾಣ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಗೆ ಅಂದಾಜು ರೂ: 200 ಲಕ್ಷಗಳ ಅನುದಾನವನ್ನು ಮಂಜೂರು ಮಾಡುವಂತೆ ಕೋರಿದ್ದಾರೆ.

Exit mobile version